‘ಶಾಂತಿ ನೆಲೆಸಿರುವಲ್ಲಿ ಅಹಿಂಸೆ ಸ್ವಾಭಾವಿಕವಾಗಿ ಇರುತ್ತದೆ. ಅಲ್ಲಿ ಹಿಂಸೆಗೆ ಅವಕಾಶವೇ ಇರುವುದಿಲ್ಲ. ಶಾಂತಿಯಿಂದ ಅಹಿಂಸೆಯೋ, ಅಹಿಂಸೆಯಿಂದ ಶಾಂತಿಯೋ ಎಂಬುದು ನಮ್ಮ ಮೂಲ ಪ್ರಶ್ನೆಯಾಗಿದೆ. ಶಾಂತಿ, ಅಹಿಂಸೆಗಳಲ್ಲಿ ಗುರಿ ಯಾವುದು ಮತ್ತು ಅದನ್ನು ಸಾಧಿಸಲು ಇರುವ ಹಾದಿ ಯಾವುದು ಎಂಬುದನ್ನು ಯೋಚಿಸಬೇಕು. ಶಾಂತಿ ಎಂಬುದು ನಾವು ತಲುಪಬೇಕಾದ ಗುರಿ. ಅದನ್ನು ತಲುಪಲು ಅನುಸರಿಸಬೇಕಾದ ದಾರಿಯೇ ಅಹಿಂಸೆ’ ಎಂದು ಪ್ರತಿಪಾದಿಸಿದರು.