ಗಜ್ಜುಗನಹಳ್ಳಿ, ಜೋಗಿಹಟ್ಟಿ, ತೊರೆಕೋಲಮ್ಮನಹಳ್ಳಿ, ಜೋಗಿಹಟ್ಟಿ, ಎನ್.ದೇವರಹಳ್ಳಿ, ನೇರಲಗುಂಟೆ ವರವು ಕಾವಲು ಸೇರಿ ವಿವಿಧ
ಗ್ರಾಮಗಳ ರೈತರು ತೋಟಗಾರಿಕಾ ಇಲಾಖೆಯಲ್ಲಿ ದೊರೆಯುವ ಸಹಾಯಧನದಿಂದ ತಮ್ಮ ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಸಾವಯವ ಕೃಷಿ ವಿಧಾನದಲ್ಲಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ತೋಟ ವಿಸ್ತರಣೆ ಹಾಗೂ ಬಯಲುಸೀಮೆಯ ಹಣ್ಣಿನ ಬೆಳೆಗೆ ನರೇಗಾ ಯೋಜನೆ ವರದಾನವಾಗಿದೆ.