‘ನನ್ನದು 3 ಎಕರೆಯಿಂದ ಸುಮಾರು 250 ಪ್ಯಾಕೆಟ್ ಆಗಬಹುದು. ಈರುಳ್ಳಿ ಹೆಚ್ಚು ಸಣ್ಣದು ಹಾಗೂ ಸ್ವಲ್ಪ ದೊಡ್ಡ ಗಾತ್ರದ್ದು ಇವೆ. ಈಗ ಈರುಳ್ಳಿ ಕಿತ್ತು ಮಾರುಕಟ್ಟೆಗೆ ಸಾಗಿಸಲು ಕೀಳಿಸುವುದು, ಕೊಯ್ಯಿಸುವ ಕೂಲಿ, ಟ್ರ್ಯಾಕ್ಟರ್ ಬಾಡಿಗೆ, ಖಾಲಿ ಚೀಲ ತರುವುದು, ಮಾರುಕಟ್ಟೆಗೆ ಸಾಗಿಸಲು ವಾಹನ ಬಾಡಿಗೆ ಸೇರಿ ಮತ್ತೆ ₹ 50 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಇಷ್ಟೆಲ್ಲ ಖರ್ಚು ಬರುವ ಜತೆಗೆ ಈರುಳ್ಳಿ ಸ್ವಚ್ಛ ಮಾಡಿಕೊಳ್ಳಲು ಮತ್ತೆ ಒಂದು ವಾರ ನಾನು ಹೆಣಗಬೇಕು. ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಅಂದಾಜು ₹ 1.50 ಲಕ್ಷದಷ್ಟು ಸಿಗಬಹುದು. ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವಷ್ಟೇ ಸಿಗುವುದಾದರೆ ಮತ್ತ್ಯಾಕೆ ಕಷ್ಟಪಡಬೇಕು. ಹೀಗಾಗಿ ಮನನೊಂದು ಜಮೀನಿನಲ್ಲಿಯೇ ಕೊಳೆಯಲಿ ಎಂದು ನಾಶ ಪಡಿಸುತ್ತಿದ್ದೇನೆ’ ಎಂದು ಬೆಳೆಗಾರ ಲೋಕಣ್ಣ
ಕಣ್ಣೀರಿಟ್ಟರು.