ತಾತ್ಕಾಲಿಕ ಚಿಕಿತ್ಸಾ ಕೇಂದ್ರ: ಹೊರ ರೋಗಿಗಳ ಅನುಕೂಲಕ್ಕೆ ಆರೋಗ್ಯ ಇಲಾಖೆ ಇಲ್ಲಿನ ಬಾಲಕರ ಮೆಟ್ರಿಕ್ಪೂರ್ವ ವಿದ್ಯಾರ್ಥಿನಿಲಯದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದೆ. ಆದರೆ, ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಕಾರ್ಯ ನಿರ್ವಹಿಸಲಾಗುತ್ತಿದೆ. ರಾತ್ರಿ ವೇಳೆ ಅಪಘಾತ ಸಂಭವಿಸದರೆ, ಹಾವು, ಚೇಳು ಕಡಿದರೆ, ಗರ್ಭಿಣಿಯರು ಇಂತಹ ತುರ್ತು
ಚಿಕಿತ್ಸೆ ಅಗತ್ಯವಿರುವ ರೋಗಿಗಳು ದೂರದ ಹಿರಿಯೂರು ಇಲ್ಲವೇ ಚಿತ್ರದುರ್ಗವನ್ನೇ ಅವಲಂಬಿಸಬೇಕಿದೆ.