ವಿನಾಯಕ ಚಿತ್ರಮಂದಿರದ ವೃತ್ತದಿಂದ ಪಟ್ಟಣದ ಬಿದರಿಕೆರೆ ರಸ್ತೆ, ದೊಡ್ಡಪೇಟೆ, ವಾಸವಿಮಹಲ್
ರಸ್ತೆ, ಆಸ್ಪತ್ರೆ ರಸ್ತೆ, ಶಿವಕುಮಾರ ಸ್ವಾಮೀಜಿ ರಸ್ತೆ ಮೂಲಕ ಹಳೆ ರಾಷ್ಟ್ರೀಯ ಹೆದ್ದಾರಿ ಬಳಿಯ ಎಸ್ಎಂಎಲ್ ಮೋಟರ್ಸ್ವರೆಗೆ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ಸ್ವಾಮೀಜಿಗೆ ಪುಷ್ಪಮಾಲೆ ಹಾಕಿ ಭಕ್ತಿ ಸಮರ್ಪಿಸಿದರು. ಭಾನುವಾರ ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದ್ದು, ಸೋಮವಾರ ಸಿರಿಗೆರೆ ವೃತ್ತದ ಮೂಲಕ ಪಾದಯಾತ್ರೆ ಸಾಗಿ ಲಕ್ಷ್ಮೀಸಾಗರದಲ್ಲಿ ವಾಸ್ತವ್ಯ ಮಾಡಲಿದೆ.