ಬಸ್ ನಿಲ್ದಾಣಕ್ಕೆ ಬೆಳಿಗ್ಗೆಯಿಂದಲೇ ಪ್ರಯಾಣಿಕರು ಬಂದಿದ್ದರು. ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಸೇವೆ ಒದಗಿಸಲಾಯಿತು. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಸೇರಿ ಹಲವೆಡೆಗೆ ಬಸ್ ಸಂಚರಿಸಿದವು. ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಿಗೆ ಸೇವೆ ಒದಗಿಸಿದವು. ನಗರದಿಂದ ಹೊರಟ ಬಸ್ಗಳು ಮಧ್ಯೆ ಯಾವ ಸ್ಥಳದಲ್ಲಿಯೂ ನಿಲುಗಡೆ ಮಾಡಲಿಲ್ಲ.