ಈ ಮರ ಅಂದಕ್ಕಷ್ಟೇ ಅಲ್ಲ. ಆರೋಗ್ಯಕ್ಕೂ ಸಹಾಯಕ. ಇದರ ಕಾಂಡ, ಎಲೆ, ಹಣ್ಣುಗಳನ್ನು ಅತಿಸಾರ, ಭೇದಿ, ಚರ್ಮರೋಗ, ದೇಹದ ನೋವು, ಮೂಳೆನೋವಿಗಾಗಿ ಉಪಯೋಗಿಸುವರು. 365 ದಿನಗಳೂ ಹಸಿರಾಗಿರುವ ಇದು, ಟೊಳ್ಳು ಕೊಂಬೆಗಳನ್ನು ಹೊಂದಿದ್ದು, ಗಾಳಿ ಬಿದ್ದಾಗ ಮುರಿಯುತ್ತದೆ. ಒಳ್ಳೆ ತಂಪಾದ ಗಾಳಿ ನೀಡುವ ಈ ಮರ ನಿಜಕ್ಕೂ ದಾರಿಹೋಕರ ಮನಸ್ಸಿಗೆ ಮುದ ನೀಡುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಭಾನುಮೋಹನ್.