<p><strong>ಹೊಸದುರ್ಗ</strong>:ಸಹೋದರತೆಗೆ ನಂಬಿಕೆ ಇಲ್ಲದಂತಾಗಿದ್ದು, ಧರ್ಮ ಮತ್ತು ಜಾತಿಗಳಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ಕಾದಂಬರಿಕಾರ ಬಿ.ಎಲ್. ವೇಣು ಬೇಸರ ವ್ಯಕ್ತಪಡಿಸಿದರು.</p>.<p>ಇಲ್ಲಿಯ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಅನಿಕೇತನ ವಿಚಾರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬಾಗೂರು ಆರ್. ನಾಗರಾಜಪ್ಪ ಅವರ ‘ಹೊಸದುರ್ಗ ಸಿರಿ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಎಲ್ಲೆಡೆ ಭೇದ–ಭಾವ ತಾಂಡವವಾಡುತ್ತಿದೆ. ಇದು ಆಹಾರ ಸೇವನೆ ವಿಚಾರದಲ್ಲೂ ನಡೆಯುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಜನರು ಭ್ರಾತೃತ್ವ, ಸಹೋದರತೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಮತಾಂತರಕ್ಕೆ ಸಂಬಂಧಿಸಿದ ಚರ್ಚೆಗಳು ಪಂಪ, ರನ್ನ, ಬಸವಣ್ಣ ಅವರ ಕಾಲದಲ್ಲೇ ನಡೆದಿದ್ದವು.ರಾಜಕಾರಣಿಗಳು ಇಂತಹ ವಿಚಾರಗಳನ್ನು ಬಿಟ್ಟು ಬಡತನ, ನಿರುದ್ಯೋಗ, ಅಸ್ಪೃಶ್ಯತೆ ನಿವಾರಣೆ ಕುರಿತು ಚರ್ಚಿಸುವಂತಾಗಬೇಕು’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಬಾಗೂರು ಆರ್. ನಾಗರಾಜಪ್ಪ, ‘ಈ ಪುಸ್ತಕ ತಾಲ್ಲೂಕಿನ ಹೊಸ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದೆ. ಅವಧೂತರ ಜೀವನ ಶೈಲಿ, ಪುರಾತನ ಪಟ್ಟಣಗಳ ಕುರಿತ ಮಾಹಿತಿ ಇದರಲ್ಲಿದೆ. ಹೊಸದುರ್ಗ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p>ನಿವೃತ್ತ ಪ್ರಾಂಶುಪಾಲ ಪಿ.ಎಲ್. ಲೋಕೇಶ್ವರ್, ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಬನಶಂಕರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಮಂಜುನಾಥ್ ಇದ್ದರು.</p>.<p class="Briefhead">**<br />ಜ್ಞಾನ ಇದ್ದರೆ ಎಲ್ಲರೂ ಸರ್ವಶ್ರೇಷ್ಠರು. ವಿಶ್ವದಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಸತ್ಯ ಮಾರ್ಗದಲ್ಲಿ ನಡೆಯುವುದು ಶ್ರೇಷ್ಠವಾದರೆ, ಒಟ್ಟಾಗಿ ಬಾಳುವ ಗುಣ ಮೈಗೂಡಿಸಿಕೊಂಡರೆ ಎಲ್ಲವೂ ಸುಂದರವಾಗಿ ಕಾಣಲಿದೆ.<br />-<em><strong>ಎಚ್. ಬಿಲ್ಲಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ</strong></em></p>.<p class="Briefhead"><strong>ಪುಸ್ತಕದಲ್ಲಿ ಮಣ್ಣಿನ ಸೊಗಡಿದೆ</strong><br />‘ಹೊಸದುರ್ಗ ಸಿರಿ ಪುಸ್ತಕದಲ್ಲಿ ಈ ಮಣ್ಣಿನ ಸೊಗಡಿದೆ. ತಾಲ್ಲೂಕಿನ ನೆಲ–ಜಲ, ಸಂಸ್ಕೃತಿ–ಸಂಪ್ರದಾಯ, ಜಾನಪದ ಕಲೆ, ಪವಾಡ ಪುರುಷರ ಮಾಹಿತಿ ಹಾಗೂ ಐತಿಹಾಸಿಕ ಸ್ಥಳಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಕೃತಿ ಹೊಂದಿದೆ. ಪುಸ್ತಕ ಅನೇಕ ಕುತೂಹಲಕಾರಿ ಸಂಗತಿ ಒಳಗೊಂಡಿದೆ’ ಎಂದು ಬಿ.ಎಲ್. ವೇಣು ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>:ಸಹೋದರತೆಗೆ ನಂಬಿಕೆ ಇಲ್ಲದಂತಾಗಿದ್ದು, ಧರ್ಮ ಮತ್ತು ಜಾತಿಗಳಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ಕಾದಂಬರಿಕಾರ ಬಿ.ಎಲ್. ವೇಣು ಬೇಸರ ವ್ಯಕ್ತಪಡಿಸಿದರು.</p>.<p>ಇಲ್ಲಿಯ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಅನಿಕೇತನ ವಿಚಾರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬಾಗೂರು ಆರ್. ನಾಗರಾಜಪ್ಪ ಅವರ ‘ಹೊಸದುರ್ಗ ಸಿರಿ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಎಲ್ಲೆಡೆ ಭೇದ–ಭಾವ ತಾಂಡವವಾಡುತ್ತಿದೆ. ಇದು ಆಹಾರ ಸೇವನೆ ವಿಚಾರದಲ್ಲೂ ನಡೆಯುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಜನರು ಭ್ರಾತೃತ್ವ, ಸಹೋದರತೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಮತಾಂತರಕ್ಕೆ ಸಂಬಂಧಿಸಿದ ಚರ್ಚೆಗಳು ಪಂಪ, ರನ್ನ, ಬಸವಣ್ಣ ಅವರ ಕಾಲದಲ್ಲೇ ನಡೆದಿದ್ದವು.ರಾಜಕಾರಣಿಗಳು ಇಂತಹ ವಿಚಾರಗಳನ್ನು ಬಿಟ್ಟು ಬಡತನ, ನಿರುದ್ಯೋಗ, ಅಸ್ಪೃಶ್ಯತೆ ನಿವಾರಣೆ ಕುರಿತು ಚರ್ಚಿಸುವಂತಾಗಬೇಕು’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಬಾಗೂರು ಆರ್. ನಾಗರಾಜಪ್ಪ, ‘ಈ ಪುಸ್ತಕ ತಾಲ್ಲೂಕಿನ ಹೊಸ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದೆ. ಅವಧೂತರ ಜೀವನ ಶೈಲಿ, ಪುರಾತನ ಪಟ್ಟಣಗಳ ಕುರಿತ ಮಾಹಿತಿ ಇದರಲ್ಲಿದೆ. ಹೊಸದುರ್ಗ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p>ನಿವೃತ್ತ ಪ್ರಾಂಶುಪಾಲ ಪಿ.ಎಲ್. ಲೋಕೇಶ್ವರ್, ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಬನಶಂಕರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಮಂಜುನಾಥ್ ಇದ್ದರು.</p>.<p class="Briefhead">**<br />ಜ್ಞಾನ ಇದ್ದರೆ ಎಲ್ಲರೂ ಸರ್ವಶ್ರೇಷ್ಠರು. ವಿಶ್ವದಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಸತ್ಯ ಮಾರ್ಗದಲ್ಲಿ ನಡೆಯುವುದು ಶ್ರೇಷ್ಠವಾದರೆ, ಒಟ್ಟಾಗಿ ಬಾಳುವ ಗುಣ ಮೈಗೂಡಿಸಿಕೊಂಡರೆ ಎಲ್ಲವೂ ಸುಂದರವಾಗಿ ಕಾಣಲಿದೆ.<br />-<em><strong>ಎಚ್. ಬಿಲ್ಲಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ</strong></em></p>.<p class="Briefhead"><strong>ಪುಸ್ತಕದಲ್ಲಿ ಮಣ್ಣಿನ ಸೊಗಡಿದೆ</strong><br />‘ಹೊಸದುರ್ಗ ಸಿರಿ ಪುಸ್ತಕದಲ್ಲಿ ಈ ಮಣ್ಣಿನ ಸೊಗಡಿದೆ. ತಾಲ್ಲೂಕಿನ ನೆಲ–ಜಲ, ಸಂಸ್ಕೃತಿ–ಸಂಪ್ರದಾಯ, ಜಾನಪದ ಕಲೆ, ಪವಾಡ ಪುರುಷರ ಮಾಹಿತಿ ಹಾಗೂ ಐತಿಹಾಸಿಕ ಸ್ಥಳಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಕೃತಿ ಹೊಂದಿದೆ. ಪುಸ್ತಕ ಅನೇಕ ಕುತೂಹಲಕಾರಿ ಸಂಗತಿ ಒಳಗೊಂಡಿದೆ’ ಎಂದು ಬಿ.ಎಲ್. ವೇಣು ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>