20 ರಿಂದ 30 ಕೊಳವೆಯನ್ನು 20 ಅಡಿ ಆಳದವರೆಗೂ ಕೊರೆದು ಒಮ್ಮೆಗೆ ಸ್ಫೋಟಿಸುತ್ತಿದ್ದಾರೆ. ಇದರಿಂದ ಉಂಟಾಗುವ ದೂಳು ಗ್ರಾಮವನ್ನು ಆವರಿಸುತ್ತಿದೆ. ಒಂದು ವರ್ಷದಿಂದ ಗಂಧಕದ ವಾಸನೆ, ದೂಳು ಕುಡಿದು ಬದುಕಲು ಆಗುತ್ತಿಲ್ಲ. ಇದರಿಂದಾಗಿ ಮಕ್ಕಳಿನಿಂದ ಹಿಡಿದು ವೃದ್ಧರವರೆಗೂ ಶೀತ, ನೆಗಡಿ, ಕೆಮ್ಮ , ಜ್ವರದಿಂದ ಬಳಲುತ್ತಿದ್ದಾರೆ. ಕೂಲಿ ಮಾಡಿ ದುಡಿದ ಹಣವನ್ನು ಆಸ್ಪತ್ರೆಗೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.