ಆದರೂ ಉಭಯ ಜಿಲ್ಲೆಗಳ ನೌಕರರಿಗೆ ಇದು ಅನ್ವಯಿಸುತ್ತಿಲ್ಲ. ಗುಲಾಬಿ, ಸುಮತಿ ಬಾಯಿ, ವಿಜಯ ಕುಮಾರಿ, ಸತ್ಯಶಂಕರಿ, ಅನಿತಾ, ಯೋಗಿನಿ, ರಂಜನಿ ಹಾಗೂ ನೇತ್ರಾಕ್ಷಿ ಆಳ್ವ ಅವರು ಈಗಲೂ ನೌಕರಿ ಕಾಯಂ ಆಗಲಿದೆ ಎಂದು ಕಾಯುತ್ತಿದ್ದಾರೆ. ನಿರಂಜನ್ ಆಚಾರ್ಯ ಎಂಬುವರು ನಿವೃತ್ತಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರೆ, ಪ್ರಕ್ರಿಯೆ ಪೂರ್ಣಗೊಳಿಸಿ ಕಡತವನ್ನು ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ಜಿಲ್ಲಾಡಳಿತವೇ ಅದನ್ನು ಮಾಡಬಹುದು ಎಂಬುದು ಸಚಿವಾಲಯದ ಉತ್ತರವಾಗಿದೆ ಎಂದರು.