<p><strong>ಚಿತ್ರದುರ್ಗ</strong>: ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಣಸಾಡಿದ ಚಿತ್ರದುರ್ಗ ಉಪವಿಭಾಗ ತಂಡವೂ ಚಳ್ಳಕೆರೆ ಉಪವಿಭಾಗ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಬಹುಮಾನ ಪಡೆದುಕೊಂಡಿತು. ಅಷ್ಟೇ ಅಲ್ಲದೆ, ವಿವಿಧ ಕ್ರೀಡೆಗಳಿಂದ 76 ಅಂಕ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.</p>.<p>ಇದು ಕಂಡು ಬಂದಿದ್ದು, ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೂರು ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ.</p>.<p>ಹಗ್ಗ ಜಗ್ಗಾಟ ಆರಂಭಕ್ಕೂ ಮುನ್ನ ಹಗ್ಗದ ಎರಡು ತುದಿಗಳನ್ನು ಹಿಡಿದು ನಿಂತಿದ್ದ ಎರಡೂ ಕಡೆಯ ಪೊಲೀಸ್ ತಂಡದವರು ಸೂಚನೆಗಾಗಿ ಕಾಯುತ್ತ ನಿಂತಿದ್ದರು. ದಾವಣಗೆರೆ ಪೂರ್ವವಲಯ ಐಜಿಪಿ ಎಸ್. ರವಿ ಅವರು ಕ್ರೀಡೆಗೆ ಚಾಲನೆ ನೀಡುತ್ತಿದ್ದಂತೆ ಉತ್ಸುಕರಾದರು.</p>.<p>ದೇಹದ ಶಕ್ತಿಯನ್ನು ತೋಳಿಗೆ ಇಳಿಸಿಕೊಂಡು ಹಿಡಿದಿದ್ದ ಹಗ್ಗ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಮೂಡಿತ್ತು. ತಲಾ ಒಂಬತ್ತು ಮಂದಿ ಭಾಗವಹಿಸಿದ್ದ ಈ ಕ್ರೀಡೆಯೂ ಎರಡು ತಂಡಗಳಿಗೂ ಪ್ರತಿಷ್ಠೆಯ ಸ್ಪರ್ಧೆಯಾಗಿತ್ತು. ಸಂಜೆ ಪಂದ್ಯ ಆರಂಭವಾಯಿತು. ಅಂತಿಮ ಸುತ್ತಿನಲ್ಲಿಯೂ ತೀವ್ರ ಪೈಪೋಟಿ ನೀಡಿದ ಚಳ್ಳಕೆರೆ ತಂಡವನ್ನು ಚಿತ್ರದುರ್ಗ ತಂಡ ಮಣಿಸಿ ಗೆಲುವಿನ ನಗೆ ಬೀರಿತು. ಚಳ್ಳಕೆರೆ ಉಪವಿಭಾಗ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.</p>.<p class="Subhead"><strong>ಚಾಂಪಿಯನ್</strong>: ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಉಪವಿಭಾಗದ ಪ್ರಭುರಾಂ ಮತ್ತು ಪ್ರವೀಣ್ ಕುಮಾರ್, ಮಹಿಳಾ ವಿಭಾಗದಲ್ಲಿ ಛಾಯಾದೇವಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p class="Subhead">ಗುಂಪು ಕ್ರೀಡೆ: ಕಬಡ್ಡಿ ಆಟದಲ್ಲಿ ಚಿತ್ರದುರ್ಗ ಡಿಎಆರ್–1, ವಾಲಿಬಾಲ್ನಲ್ಲಿ ಚಳ್ಳಕೆರೆ ಉಪವಿಭಾಗ–1 ಬಹುಮಾನ ಪಡೆದವು.ಪುರುಷ ವಿಭಾಗದಲ್ಲಿ 4x100 ರೀಲೆ ಅಂತಿಮ ಸ್ಪರ್ಧೆಯಲ್ಲಿ ಚಿತ್ರದುರ್ಗ ಉಪವಿಭಾಗ–1, ಚಿತ್ರದುರ್ಗ ಡಿಎಆರ್–2ನೇ ಸ್ಥಾನ ಪಡೆದುಕೊಂಡಿತು.</p>.<p>ಎಸ್. ರವಿ, ‘ಕೊನೆ ಉಸಿರು ಇರುವತನಕ ನಿತ್ಯ ಒಂದು ಗಂಟೆ ದೈಹಿಕ ಚಟುವಟಿಕೆ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಒತ್ತಡಮುಕ್ತ ಜೀವನ ನಡೆಸಲು ಸಹಕಾರಿ’ ಎಂದರು.</p>.<p>‘ನಾವೆಲ್ಲಾ ಒಂದೇ ಕುಟುಂಬದವರಂತೆ ನೆರೆದು ಪೊಲೀಸೇತರವಾಗಿ ಪಾಲ್ಗೊಂಡು ಕ್ರೀಡಾಪಟುವಿನ ಚೈತನ್ಯದಂತೆ ಪಾಲ್ಗೊಂಡು ಸಂಭ್ರಮಿಸುತ್ತೇವೆ. ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಂಡು, ನಡವಳಿಕೆ ತಿದ್ದಿಕೊಂಡು ಉತ್ಸಾಹದಿಂದ ಇರಲು ಕ್ರೀಡೆ ಸಹಕಾರಿಯಾಗಿದೆ. ಗೆಲವು ಯಾರದೇ ಆದರೂ ನಾನೇ ಗೆದ್ದಿದ್ದೇನೆ ಎಂದು ಸಂಭ್ರಮಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ರೋಷನ್ ಜಮೀರ್, ಶ್ರೀಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಣಸಾಡಿದ ಚಿತ್ರದುರ್ಗ ಉಪವಿಭಾಗ ತಂಡವೂ ಚಳ್ಳಕೆರೆ ಉಪವಿಭಾಗ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಬಹುಮಾನ ಪಡೆದುಕೊಂಡಿತು. ಅಷ್ಟೇ ಅಲ್ಲದೆ, ವಿವಿಧ ಕ್ರೀಡೆಗಳಿಂದ 76 ಅಂಕ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.</p>.<p>ಇದು ಕಂಡು ಬಂದಿದ್ದು, ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೂರು ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ.</p>.<p>ಹಗ್ಗ ಜಗ್ಗಾಟ ಆರಂಭಕ್ಕೂ ಮುನ್ನ ಹಗ್ಗದ ಎರಡು ತುದಿಗಳನ್ನು ಹಿಡಿದು ನಿಂತಿದ್ದ ಎರಡೂ ಕಡೆಯ ಪೊಲೀಸ್ ತಂಡದವರು ಸೂಚನೆಗಾಗಿ ಕಾಯುತ್ತ ನಿಂತಿದ್ದರು. ದಾವಣಗೆರೆ ಪೂರ್ವವಲಯ ಐಜಿಪಿ ಎಸ್. ರವಿ ಅವರು ಕ್ರೀಡೆಗೆ ಚಾಲನೆ ನೀಡುತ್ತಿದ್ದಂತೆ ಉತ್ಸುಕರಾದರು.</p>.<p>ದೇಹದ ಶಕ್ತಿಯನ್ನು ತೋಳಿಗೆ ಇಳಿಸಿಕೊಂಡು ಹಿಡಿದಿದ್ದ ಹಗ್ಗ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಮೂಡಿತ್ತು. ತಲಾ ಒಂಬತ್ತು ಮಂದಿ ಭಾಗವಹಿಸಿದ್ದ ಈ ಕ್ರೀಡೆಯೂ ಎರಡು ತಂಡಗಳಿಗೂ ಪ್ರತಿಷ್ಠೆಯ ಸ್ಪರ್ಧೆಯಾಗಿತ್ತು. ಸಂಜೆ ಪಂದ್ಯ ಆರಂಭವಾಯಿತು. ಅಂತಿಮ ಸುತ್ತಿನಲ್ಲಿಯೂ ತೀವ್ರ ಪೈಪೋಟಿ ನೀಡಿದ ಚಳ್ಳಕೆರೆ ತಂಡವನ್ನು ಚಿತ್ರದುರ್ಗ ತಂಡ ಮಣಿಸಿ ಗೆಲುವಿನ ನಗೆ ಬೀರಿತು. ಚಳ್ಳಕೆರೆ ಉಪವಿಭಾಗ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.</p>.<p class="Subhead"><strong>ಚಾಂಪಿಯನ್</strong>: ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಉಪವಿಭಾಗದ ಪ್ರಭುರಾಂ ಮತ್ತು ಪ್ರವೀಣ್ ಕುಮಾರ್, ಮಹಿಳಾ ವಿಭಾಗದಲ್ಲಿ ಛಾಯಾದೇವಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p class="Subhead">ಗುಂಪು ಕ್ರೀಡೆ: ಕಬಡ್ಡಿ ಆಟದಲ್ಲಿ ಚಿತ್ರದುರ್ಗ ಡಿಎಆರ್–1, ವಾಲಿಬಾಲ್ನಲ್ಲಿ ಚಳ್ಳಕೆರೆ ಉಪವಿಭಾಗ–1 ಬಹುಮಾನ ಪಡೆದವು.ಪುರುಷ ವಿಭಾಗದಲ್ಲಿ 4x100 ರೀಲೆ ಅಂತಿಮ ಸ್ಪರ್ಧೆಯಲ್ಲಿ ಚಿತ್ರದುರ್ಗ ಉಪವಿಭಾಗ–1, ಚಿತ್ರದುರ್ಗ ಡಿಎಆರ್–2ನೇ ಸ್ಥಾನ ಪಡೆದುಕೊಂಡಿತು.</p>.<p>ಎಸ್. ರವಿ, ‘ಕೊನೆ ಉಸಿರು ಇರುವತನಕ ನಿತ್ಯ ಒಂದು ಗಂಟೆ ದೈಹಿಕ ಚಟುವಟಿಕೆ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಒತ್ತಡಮುಕ್ತ ಜೀವನ ನಡೆಸಲು ಸಹಕಾರಿ’ ಎಂದರು.</p>.<p>‘ನಾವೆಲ್ಲಾ ಒಂದೇ ಕುಟುಂಬದವರಂತೆ ನೆರೆದು ಪೊಲೀಸೇತರವಾಗಿ ಪಾಲ್ಗೊಂಡು ಕ್ರೀಡಾಪಟುವಿನ ಚೈತನ್ಯದಂತೆ ಪಾಲ್ಗೊಂಡು ಸಂಭ್ರಮಿಸುತ್ತೇವೆ. ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಂಡು, ನಡವಳಿಕೆ ತಿದ್ದಿಕೊಂಡು ಉತ್ಸಾಹದಿಂದ ಇರಲು ಕ್ರೀಡೆ ಸಹಕಾರಿಯಾಗಿದೆ. ಗೆಲವು ಯಾರದೇ ಆದರೂ ನಾನೇ ಗೆದ್ದಿದ್ದೇನೆ ಎಂದು ಸಂಭ್ರಮಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ರೋಷನ್ ಜಮೀರ್, ಶ್ರೀಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>