‘ಎಲ್ಲ ರಾಜಕೀಯ ಸ್ಥಿತ್ಯಂತರಗಳು ಆಯಾ ಪ್ರದೇಶದ ಜನರ ಬದುಕಿನ ರೂಪುರೇಷೆ ನಿರ್ಧರಿಸುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿದ್ದ 600ಕ್ಕೂ ಹೆಚ್ಚು ರಾಜಮನೆತನಗಳನ್ನು ಒಟ್ಟುಗೂಡಿಸಿ ಸ್ವಾತಂತ್ರ್ಯಗೊಳಿಸಿದುದು ಸಾಮಾಜಿಕವಾಗಿ ದೊಡ್ಡ ಸ್ಥಿತ್ಯಂತರವನ್ನು ತಂದಿತು. ಸಾಕಷ್ಟು ಭಿನ್ನತೆಯಿದ್ದೂ, ಏಕತೆಯನ್ನು ಸಾಧಿಸಿರುವುದಕ್ಕೆ ಮುಖ್ಯ ಕಾರಣ ರಾಜಕೀಯ ಸ್ಥಿತ್ಯಂತರ. ಬುದ್ಧ, ಬಸವಣ್ಣ, ಗಾಂಧಿ ಮೊದಲಾದವರು ಮಾಡಿದ ಸಾಮಾಜಿಕ ಕಾರ್ಯಗಳು ಮತ್ತೆ ಈಗ ಆಗಬೇಕು. ನಮ್ಮ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳಿಗೆ ಉತ್ತರ ಕಂಡುಕೊಳ್ಳಬಹುದು’ ಎಂದು ವಿವರಿಸಿದರು.