ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನೂರಾರು ಭಕ್ತರು ಮಕ್ಕಳ ಮದುವೆ, ವ್ಯಾಪಾರ, ಸಮೃದ್ಧ ಮಳೆ, ಬೆಳೆ, ಮತ್ತಿತರ ಮಂಗಳ ಕಾರ್ಯಗಳು ಈಡೇರುವಂತೆ ಕೋಡಗಲ್ಲು ಹಾಗೂ ವೀರಭದ್ರ ಸ್ವಾಮಿಗೆ ಹರಕೆ ಹೊತ್ತುಕೊಂಡಿರುತ್ತಾರೆ. ಅವರ ಹರಕೆಗಳು ತೀರಿದಾಗ ತಮ್ಮ ಇಚ್ಛಾನುಸಾರ ಮಂಡಕ್ಕಿ, ಬೆಲ್ಲವನ್ನು ಗೋಡಗಲ್ಲಿಗೆ, ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ.