‘ಕಮ್ಮಾರ, ಕಂಚುಗಾರ, ಅಕ್ಕಸಾಲಿಗ, ಶಿಲ್ಪಿ, ಬಡಗಿ ಎಂಬ ಐದು ಕಾಯಕದ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವವರು ವಿಶ್ವಕರ್ಮರು. ಕುರುಬ ಸಮುದಾಯ ಹೊರತುಪಡಿಸಿದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ ಇದಾಗಿದೆ. ರಾಜ್ಯದ ಪ್ರತಿ ಹಳ್ಳಿಯಲ್ಲಿ ವಿಶ್ವಕರ್ಮರು ನೆಲೆಸಿದ್ದಾರೆ. ಆದರೆ, ರಾಜಕೀಯ, ಆರ್ಥಿಕವಾಗಿ ಸಿಗಬೇಕಾದ ಮಾನ್ಯತೆಗಳು ಲಭ್ಯವಾಗಿಲ್ಲ’ ಎಂದರು.