ಬೆಳಗಾವಿ ತರಬೇತಿ ಶಾಲೆಯಲ್ಲಿದ್ದ ಪ್ರಶಿಕ್ಷಣಾರ್ಥಿಗಳನ್ನು ಮಂಡ್ಯ ಜಿಲ್ಲೆಗೆ, ಖಾನಾಪುರ ಶಾಲೆಯ ವಾರ್ಡರ್ಗಳನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ, ಧಾರವಾಡದ ಮಹಿಳಾ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳನ್ನು ಹಾಸನಕ್ಕೆ ನಿಯೋಜಿಸಲಾಗಿದೆ. ತುಮಕೂರು ಹಾಗೂ ಮೈಸೂರು ಕಾರಾಗೃಹ ತರಬೇತಿ ಸಂಸ್ಥೆಯಲ್ಲಿದ್ದವರನ್ನು ಅದೇ ಲೋಕಸಭಾ ಕ್ಷೇತ್ರದ ಭದ್ರತೆಗೆ ಕಳುಹಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.