‘ಜಗಳೂರು ತಾಲ್ಲೂಕಿಗೆ ನೀರು ಕೊಡಲು ವಿರೋಧವಿಲ್ಲ. ಆದರೆ, ನೀರು ಹಂಚಿಕೆಯ ಪ್ರಮಾಣ ನ್ಯಾಯಸಮ್ಮತವಾಗಿ ಇರಬೇಕು. ಕೆ.ಸಿ.ರೆಡ್ಡಿ ವರದಿಯ ಪ್ರಕಾರ ಬೆಳಗಟ್ಟದಿಂದ ಕಾತ್ರಾಳ್ ಕೆರೆಗೆ ನಾಲೆ ನಿರ್ಮಿಸಬೇಕು. ಅಲ್ಲಿಂದ ಮುದ್ದಾಪುರ, ಯಳಗೋಡು ಕೆರೆಗಳ ಮೂಲಕ ಜಗಳೂರು ತಾಲ್ಲೂಕಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.