ಗೋಕಾಕ್ ಚಳವಳಿ ಸಂದರ್ಭದಲ್ಲಿಡಾ.ರಾಜ್ಕುಮಾರ್ ಅವರು ದಾವಣಗೆರೆಗೆ ಭರಮಸಾಗರದ ಮೂಲಕ ಹಾದು ಹೋಗುವಾಗ ಇಲ್ಲಿನ ಹಲಸಿನ ಹಣ್ಣಿನ ಸವಿ ಉಂಡಿದ್ದರು. ಆಗಿನಿಂದ ಪ್ರತಿ ವರ್ಷವೂ ಅವರ ಮನೆಗೆ ಭರಮಸಾಗರದ ಹಲಸಿನ ಹಣ್ಣನ್ನು ಇಲ್ಲಿಯ ತೋಟದ ಮಾಲೀಕ ಶೇಖರಪ್ಪ ಅವರು ಕಾರ್ಮಿಕ ಬಸವಂತಪ್ಪ ಎಂಬುವವರ ಮೂಲಕ ಬೆಂಗಳೂರಿನ ಅವರ ಮನೆಗೆ ಕಳುಹಿಸಿಕೊಡುತ್ತಿದ್ದರು. ಡಾ. ರಾಜ್ಕುಮಾರ್ ನಿಧನದ ನಂತರವೂ ಭರಮಸಾಗರದಿಂದ ಹಲಸಿನ ಹಣ್ಣನ್ನು ಡಾ.ರಾಜ್ ಕುಟುಂಬಕ್ಕೆ ಕಳುಹಿಸಲಾಗುತ್ತಿತ್ತು. ಆಗ ಪಾರ್ವತಮ್ಮ ನವರು, ಶಿವಣ್ಣ, ರಾಘಣ್ಣ, ಪುನೀತ್ ಹಲಸಿನ ಹಣ್ಣನ್ನು ನೋಡಿ ಓಹೋ ಭರಮಸಾಗರದ ಹಲಸು ಎಂದು ಗುರುತಿಸಿ ಇಷ್ಟ ಪಟ್ಟು ಸೇವಿಸುತ್ತಿದ್ದರು.