ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ತುಂತುರು ಮಳೆ ಸುರಿಯಿತು. ಬೇಸಿಗೆ ಬಿಸಿಲಿಗೆ ಹೆಚ್ಚಾಗಿದ್ದ ಧಗೆ ಕೊಂಚ ಕಡಿಮೆಯಾಯಿತು.
ಮಧ್ಯಾಹ್ನದಿಂದಲೂ ಮೋಡ ಮುಸುಕಿದ ವಾತಾವರಣ ಜಿಲ್ಲೆಯಲ್ಲಿತ್ತು. ಸಂಜೆಯ ವೇಳೆಗೆ ಮೋಡಗಳು ಹನಿಗಳಾಗಿ ಧರೆಗೆ ಇಳಿದವು. ನಗರದ ರಸ್ತೆಗಳು ಮಳೆಗೆ ಒದ್ದೆಯಾದವು. ಮಳೆ ಬಿದ್ದಿದ್ದರಿಂದ ಮಣ್ಣಿನ ವಾಸನೆ ಎಲ್ಲೆಡೆ ಆವರಸಿತ್ತು.
ಜೋಗಿಮಟ್ಟಿ ವನ್ಯಧಾಮದಲ್ಲಿ ಮಳೆ ಕೊಂಚ ಬಿರುಸಾಗಿ ಸುರಿಯಿತು. ಒಣಗಿದ ಗಿಡ, ಮರಗಳಿಗೆ ಇದರಿಂದ ಅನುಕೂಲವಾಯಿತು. ಹುಲ್ಲು ತೇವಗೊಂಡಿದ್ದು, ಬೆಂಕಿಯ ಆತಂಕ ಕೊಂಚ ದೂರವಾಗಿದೆ.