ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಅನೇಕ ಹೊಂಡ, ಕಲ್ಯಾಣಿಗಳು ತುಂಬುವ ಹಂತ ತಲುಪಿವೆ. ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡ ತುಂಬಿದ್ದು, ಕೋಡಿ ಬಿದ್ದಿದೆ. ಸಿಹಿನೀರು ಹೊಂಡ ಭರ್ತಿಯಾಗಿದ್ದು, ಇನ್ನೊಂದೆರಡು ಬಿರುಸಿನ ಮಳೆಯಾದರೆ ಕೋಡಿ ಬೀಳಲಿದೆ. ಸಂತೆಹೊಂಡ ಭರ್ತಿಯಾಗಿದೆ. ಈ ಹೊಂಡಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.