ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಬಸವಣ್ಣ ಸುಜ್ಞಾನದ ಪ್ರಕಾಶ: ಶಿವಮೂರ್ತಿ ಮುರುಘಾ ಶರಣರು

Last Updated 15 ನವೆಂಬರ್ 2020, 16:14 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಚೆನ್ನಬಸವಣ್ಣ ಅವರದು ಜ್ಞಾನ ಪ್ರಕಾಶ. ಅವರ ಬದುಕಿನ ಮಹೋನ್ನತಿ ಎಂದರೆ ಸಮಾಜಕ್ಕೆ ಸುಜ್ಞಾನದ ಪ್ರಕಾಶ ಚೆಲ್ಲಿರುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಲ್ಲಿ ಭಾನುವಾರ ನಡೆದ ‘ಚೆನ್ನಬಸವಣ್ಣ’ ಅವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಅನ್ನಮಯ, ಜ್ಞಾನಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳನ್ನು ಹೇಳಿದವರು ಚೆನ್ನಬಸವಣ್ಣ’ ಎಂದ ಅವರು, ‘ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ, ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆಗೈಯಲು ಸಾಧ್ಯ ಎಂಬುದಕ್ಕೆ ಅಧಿಕ ಜ್ಞಾನಿಯಾದ ಇವರು ಮಾದರಿಯಾಗಿದ್ದಾರೆ’ ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಬಸವರಾಜ ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT