ಮುಖ್ಯ ರಸ್ತೆಗೆ ಸಿಪ್ಪೆ ಹಾಕದಂತೆ ಚಾಲಕರ ಮನವಿ: ‘ಹೋಬಳಿಯ ಅನೇಕ ಕಡೆ ಮತ್ತು ಹೊಳಲ್ಕೆರೆಯಿಂದ ದಾವಣಗೆರೆ ಮಾರ್ಗದಲ್ಲಿ, ಚಿಕ್ಕಜಾಜೂರಿನಿಂದ ಅರಸನಘಟ್ಟ ಮಾರ್ಗದ ಮೂಲಕ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿನ ಅನೇಕ ಗ್ರಾಮಗಳ ರೈತರು ಮುಖ್ಯ ರಸ್ತೆ ಬದಿಗೆ ಅಡಿಕೆ ಸಿಪ್ಪೆಯನ್ನು ತಂದು ಹಾಕುತ್ತಿದ್ದಾರೆ. ಈ ಕ್ರಮ ಸರಿಯಲ್ಲ. ಸಿಪ್ಪೆಯನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಿ’ ಎಂದು ವಾಹನ ಚಾಲಕರಾದ ಬಸವರಾಜ್, ಕಾರ್ತಿಕ್, ಹನುಮಂತಪ್ಪ, ಕಿರಣ್, ಸಾದುಲ್ಲಾಖಾನ್, ಪ್ರಕಾಶ್ ಮನವಿ ಮಾಡಿದ್ದಾರೆ.