ತಾಲ್ಲೂಕಿನ ಕುದಾಪುರದ ಐಐಎಸ್ಸಿಯ ಟ್ಯಾಲೆಂಟ್ ಡೆವಲಪ್ಮೆಂಟ್ ಕೇಂದ್ರದಲ್ಲಿ ಮೇ 14ರಿಂದ 24ರವರೆಗೆ ನಡೆಯುವ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಒಡಿಶಾದ ಹರೆಕೃಷ್ಣಗಿರಿ ಬಂದಿದ್ದರು. ಅಪರಿಚಿತ ಸವಾರನೊಬ್ಬ ಹೆಸರು, ವಿಳಾಸ ಕೇಳುವ ನೆಪದಲ್ಲಿ ಹರೆಕೃಷ್ಣಗಿರಿ ಅವರನ್ನು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಕುದಾಪುರ ಮಾರ್ಗದ ರಸ್ತೆಯನ್ನು ಬದಲಾಯಿಸಿ ಹೋದಾಗ ಮತ್ತಿಬ್ಬರು ಸಹಚರರು ಬಂದು ಬೈಕ್ ಅಡ್ಡಗಟ್ಟಿದ್ದಾರೆ. ಬಳಿಕ ಹರೆಕೃಷ್ಣಗಿರಿ ಅವರ ಬ್ಯಾಗ್, ರಾಡೊ ವಾಚ್, ಚಿನ್ನದ ಸರ, ಉಂಗುರು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.