‘ಶಾಸನದ ಕಲ್ಲು ಸುಮಾರು ಎರಡೂವರೆ ಅಡಿ ಎತ್ತರ, ಒಂದೂವರೆ ಅಡಿ ಅಗಲ ಇದ್ದು, ಮೇಲ್ಭಾಗದಲ್ಲಿ ಚಂದ್ರ, ಚಕ್ರ, ಶಂಖ, ಸೂರ್ಯ ಇವುಗಳ ರೇಖಾ ಕೆತ್ತನೆಗಳಿವೆ. ಅವುಗಳ ಕೆಳಗೆ ಪಾಳೆಯಗಾರರ ಲಿಪಿಶೈಲಿಯ ಸುಂದರ ಹಾಗೂ ಸ್ಪಷ್ಟ ಕನ್ನಡ ಅಕ್ಷರಗಳ 9 ಪಂಕ್ತಿಗಳ ಶಾಸನ ಬರಹವಿದೆ. ಈ ಶಾಸನ ಬೆಳಕಿಗೆ ಬರಲು ಗ್ರಾಮದ ಪೋಸ್ಟ್ ಚಿಕ್ಕಣ್ಣ, ಎಂ.ಒ. ಬೋರಣ್ಣ, ಟೈಲರ್ ಮಹೇಶ್, ತಪ್ಪಗೊಂಡನಹಳ್ಳಿ ವೀರಣ್ಣ ಮತ್ತು ರಾಮಜ್ಜರ ರಾಮಣ್ಣ ಪ್ರಮುಖ ಕಾರಣರಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.