ಬೆಂಗಳೂರು: ಕಾರಾಗೃಹದ ನಿಯಮ ಉಲ್ಲಂಘಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ ಶಶಿಕಲಾ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಜೈಲು ಅಧೀಕ್ಷಕರಿಂದ ಮಾಹಿತಿ ಕೇಳಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಕಾರಾಗೃಹಗಳ ಇಲಾಖೆಯ ಡಿಜಿಪಿಯಾಗಿದ್ದ (ನಿವೃತ್ತ) ಸತ್ಯನಾರಾಯಣ ರಾವ್ ಅವರು
₹2 ಕೋಟಿ ಲಂಚ ಪಡೆದು ಶಶಿಕಲಾ ಅವರಿಗೆ ವಿಶೇಷ ಕಲ್ಪಿಸಿದ್ದರು ಎನ್ನುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಬೇಕು ಎಂದು ಎಸಿಬಿ ಡಿವೈಎಸ್ಪಿ ಅವರು ಜೈಲು ಅಧಿಕಾರಿಗೆ ಬರೆ ಪತ್ರದಲ್ಲಿ ಅವರು ತಿಳಿಸಿದ್ದಾರೆ.