ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿಯಿಂದ ಸಮಸಮಾಜ ಕನಸು ನನಸು: ಎಚ್. ಕಾಂತರಾಜ್

ಎಚ್. ಕಾಂತರಾಜ್ ಹೇಳಿಕೆ
Last Updated 18 ಅಕ್ಟೋಬರ್ 2021, 4:06 IST
ಅಕ್ಷರ ಗಾತ್ರ

ಮೊಳಕಾಲ್ಮುರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿಸಿರುವ ಜಾತಿ ಮತ್ತು ಸಾಮಾಜಿಕ ಗಣತಿ ವರದಿಯಿಂದ ಸಮಾಜದ ಎಲ್ಲಾ ಜಾತಿಗಳ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಹೇಳಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವರದಿಯಲ್ಲಿ ಪ್ರತಿಯೊಂದು ಜಾತಿಯ ಸ್ಥಿತಿಗತಿ, ವೃತ್ತಿ, ಪ್ರವೃತ್ತಿ, ಆರ್ಥಿಕ, ಶೈಕ್ಷಣಿಕ ಮಟ್ಟವನ್ನು ದಾಖಲಿಸಲಾಗಿದೆ. ಸುಮಾರು 1.60 ಲಕ್ಷ ಶಿಕ್ಷಕರು ಈ ಕಾರ್ಯ ಮಾಡಿದ್ದು, ಜನರ ಸಮ್ಮತಿ ಪಡೆದು ಅಂತಿಮವಾಗಿ ಅಂಶಗಳನ್ನು ದಾಖಲಿಸಲಾಗಿದೆ. 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಜತೆಯಲ್ಲಿ ಅವರ ಸ್ಥಿತಿಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

‘ನನ್ನ ಅವಧಿ ಮುಕ್ತಾಯವಾದಾಗ ಜಾತಿ ಗಣತಿ ವರದಿಯನ್ನು ಆಯೋಗದ ಸದಸ್ಯ ಕಾರ್ಯದರ್ಶಿ ಅವರಿಗೆ ಒಪ್ಪಿಸಲಾಗಿತ್ತು. ಇಷ್ಟು ಮಾತ್ರ ಆಯೋಗದ ಕೆಲಸ. ಸದಸ್ಯ ಕಾರ್ಯದರ್ಶಿ ಸರ್ಕಾರದ ವ್ಯಕ್ತಿಯಾಗಿರುತ್ತಾರೆ. ವರದಿ ಯಾವ ಸರ್ಕಾರ ಮಾಡಿಸಿತು, ಯಾವ ಸರ್ಕಾರ ಜಾರಿ ಮಾಡಿತು ಎನ್ನುವುದಕ್ಕಿಂತ ಮುಖ್ಯ ವರದಿಯಲ್ಲಿ ಯಾವ ಅಂಶಗಳಿವೆ, ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆಯೋ ಇಲ್ಲವೋ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಕಾಂತರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT