‘ನಮ್ಮ ಮನೆಯ ಪಕ್ಕದಲ್ಲೇ ಅಡಿಕೆ ತೋಟವಿದ್ದು, ಅದರಲ್ಲಿ ಮಿಶ್ರಬೆಳೆಯಾಗಿ ಶ್ರೀಗಂಧ ಬೆಳೆದಿದ್ದೆವು. ತೋಟದಲ್ಲಿ 100 ಮರಗಳಿದ್ದವು. ಕಳ್ಳರು ಮಧ್ಯರಾತ್ರಿ ತೋಟಕ್ಕೆ ನುಗ್ಗಿದ್ದಾರೆ. ಶ್ರಿಗಂಧದ ಮರದ ಕಾಂಡಕ್ಕೆ ತಂತಿಯ ಮೆಶ್ ಹಾಕಿದ್ದು, ಸಿಮೆಂಟ್ ಕೂಡ ಮಾಡಿಸಿದ್ದೆವು. ಸಿಮೆಂಟ್ ಒಡೆದು, ಮೆಶ್ ತುಂಡರಿಸಿ ಗರಗಸದಿಂದ ಮರ ಕತ್ತರಿಸಿದ್ದಾರೆ. ನಮ್ಮ ತೋಟದಲ್ಲಿದ್ದ ನಾಯಿ ಬೊಗಳದಂತೆ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದಾರೆ’ ಎಂದು ತೋಟದ ಮಾಲೀಕ ಬಸಪ್ಪ ತಿಳಿಸಿದರು.