ಮೃತ ವ್ಯಕ್ತಿಯೊಬ್ಬರು ಮರಳಿ ಬಂದ ಪ್ರಕರಣವೊಂದು ಚಳ್ಳಕೆರೆ ತಾಲ್ಲೂಕಿನಚಿತ್ರನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈರಣ್ಣ (72) ಮರಳಿ ಬಂದ ವ್ಯಕ್ತಿ. ಅಂತ್ಯಸಂಸ್ಕಾರ ಮಾಡಿದ್ದ ಗ್ರಾಮಸ್ಥರೇ ಈರಣ್ಣನನ್ನು ಗುರುತಿಸುತ್ತಿದ್ದಾರೆ. ಸಮಾಧಿಯಾದ ವ್ಯಕ್ತಿ ಬದುಕಿ ಬಂದಿದ್ದು ಹೇಗೆ ಎಂಬ ಜಿಜ್ಞಾಸೆ ಮಾತ್ರ ಕುಟುಂಬವನ್ನು ಕಾಡುತ್ತಿದೆ.