<p>ಸಿರಿಗೆರೆ: ಪಟ್ಟಣದ ಗ್ರಾಮದೇವತೆ ಕಲ್ಲೇಶ್ವರ ಸ್ವಾಮಿಯ ಕೆಂಡದ ಉತ್ಸವ ಶುಕ್ರವಾರ ನಡೆಯಿತು.</p>.<p>ದೇವರನ್ನು ಪ್ರತಿಷ್ಠಾಪಿಸಿದ ಪಲ್ಲಕ್ಕಿಯನ್ನು ಹೊತ್ತ ಭಕ್ತರು ವಾಡಿಕೆಯಂತೆ ಮೂರು ಬಾರಿ ಕೆಂಡದ ಗುಂಡಿಯನ್ನು ಹಾಯುತ್ತಿದ್ದರು. ಆದರೆ, ಈ ವರ್ಷ ಸುಡು ಬಿಸಿಲಿನ ಕಾರಣದಿಂದಾಗಿ ಒಮ್ಮೆ ಮಾತ್ರವೇ ಕೆಂಡದ ಗುಂಡಿ ಹಾಯ್ದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.</p>.<p>ಹೊಳೆ ಪೂಜೆಯನ್ನು ಮುಗಿಸಿ ಮಡಿಯಲ್ಲಿ ವೀರಭದ್ರ ಮತ್ತು ಕಲ್ಲೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಡೋತ್ಸವಕ್ಕೆ ತರಲಾಯಿತು. ಆ ವೇಳೆಯಲ್ಲಿ ಭಂಡಾರ ಹೊತ್ತ ಮಹಿಳೆಯರು ಭಾಗಿಯಾಗಿದ್ದರು.</p>.<p>ಹೊಳೆಪೂಜೆ ಮೆರವಣಿಗೆ ಯಲ್ಲಿ ದಾವಣಗೆರೆ ಜಿಲ್ಲೆ ಹದಡಿ ಮತ್ತು ಹರಿಹರದ ಪುರವಂತಿಕೆ ಹಾಗೂ ಸಮಾಳದ ಕಲಾವಿದರು ಭಾಗಿಯಾಗಿದ್ದರು.</p>.<p>ರಥೋತ್ಸವ ಇಂದು: ಕಲ್ಲೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಂಜೆ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-44-1146625314</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರಿಗೆರೆ: ಪಟ್ಟಣದ ಗ್ರಾಮದೇವತೆ ಕಲ್ಲೇಶ್ವರ ಸ್ವಾಮಿಯ ಕೆಂಡದ ಉತ್ಸವ ಶುಕ್ರವಾರ ನಡೆಯಿತು.</p>.<p>ದೇವರನ್ನು ಪ್ರತಿಷ್ಠಾಪಿಸಿದ ಪಲ್ಲಕ್ಕಿಯನ್ನು ಹೊತ್ತ ಭಕ್ತರು ವಾಡಿಕೆಯಂತೆ ಮೂರು ಬಾರಿ ಕೆಂಡದ ಗುಂಡಿಯನ್ನು ಹಾಯುತ್ತಿದ್ದರು. ಆದರೆ, ಈ ವರ್ಷ ಸುಡು ಬಿಸಿಲಿನ ಕಾರಣದಿಂದಾಗಿ ಒಮ್ಮೆ ಮಾತ್ರವೇ ಕೆಂಡದ ಗುಂಡಿ ಹಾಯ್ದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.</p>.<p>ಹೊಳೆ ಪೂಜೆಯನ್ನು ಮುಗಿಸಿ ಮಡಿಯಲ್ಲಿ ವೀರಭದ್ರ ಮತ್ತು ಕಲ್ಲೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಡೋತ್ಸವಕ್ಕೆ ತರಲಾಯಿತು. ಆ ವೇಳೆಯಲ್ಲಿ ಭಂಡಾರ ಹೊತ್ತ ಮಹಿಳೆಯರು ಭಾಗಿಯಾಗಿದ್ದರು.</p>.<p>ಹೊಳೆಪೂಜೆ ಮೆರವಣಿಗೆ ಯಲ್ಲಿ ದಾವಣಗೆರೆ ಜಿಲ್ಲೆ ಹದಡಿ ಮತ್ತು ಹರಿಹರದ ಪುರವಂತಿಕೆ ಹಾಗೂ ಸಮಾಳದ ಕಲಾವಿದರು ಭಾಗಿಯಾಗಿದ್ದರು.</p>.<p>ರಥೋತ್ಸವ ಇಂದು: ಕಲ್ಲೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಂಜೆ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-44-1146625314</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>