‘ಪ್ರಧಾನಮಂತ್ರಿ ಆವಾಸ್ ಯೋಜನಯಡಿ ಮಂಜೂರಾಗಿರುವ ಮನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು. 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ ಅನುದಾನ ಖರ್ಚು ಮಾಡುವ ಸಂಬಂಧ ಕೆಲಸ ಆರಂಭಿಸಿ’ ಎಂದು ಹೇಳಿದರು.
ಇದೇ ವೇಳೆ ನಡೆದ ಆರಾಧನಾ ಸಮಿತಿ ಸಭೆಯಲ್ಲಿ ‘ಗೊಡಬನಹಾಳ್, ಜೆ.ಎನ್.ಕೋಟೆ, ಇಂಗಳದಾಳ್, ಸಿದ್ಧಾಪುರ, ಗೋನೂರು, ಸೊಂಡೆಕೊಳ, ಭೀಮಸಮುದ್ರ, ಎಂ.ಕೆ.ಹಟ್ಟಿ, ಡಿ.ಎಸ್.ಹಳ್ಳಿ, ಮದಕರಿಪುರ ಸೇರಿ 15 ಗ್ರಾಮಗಳಲ್ಲಿನ ದೇಗುಲಗಳ ದುರಸ್ತಿಗೆ ನೀಡಲಾದ ಅನುದಾನ ಮೊದಲು ಖರ್ಚು ಮಾಡಿ’ ಎಂದು ಶಾಸಕರು ಸೂಚಿಸಿದರು.