‘ನನ್ನನ್ನು ಒಬ್ಬ ಸಿನಿಮಾ ಗಾಯಕನನ್ನಾಗಿ ನೋಡಬೇಡಿ. ವಿಶೇಷ ಗೌರವಾತಿಥ್ಯ ನೀಡಬೇಡಿ. ನಿಮ್ಮಂತೆಯೇ ಸಾಮಾನ್ಯ ಮನುಷ್ಯ. ಇಂಥ ಸೇವಾ ಕಾರ್ಯಗಳಿಗಾಗಿ ಸ್ವಯಂ ಸೇವಕನಾಗಿ ದುಡಿಯುತ್ತೇನೆ. ವಿದ್ಯಾದಾನ, ಅನ್ನದಾನ, ರಕ್ತದಾನ ಇವೆಲ್ಲ ಶ್ರೇಷ್ಠದಾನಗಳು. ಅಂಥ ಎಲ್ಲ ಸತ್ಕಾರ್ಯವನ್ನೂ ಮುರುಘಾಮಠ ಮಾಡುತ್ತಿದೆ. ಇಂಥ ಮಠದ ಶರಣರ ಜೊತೆ ಕುಳಿತು ಮಾತನಾಡುತ್ತಿರುವುದೇ ನನ್ನ ಸೌಭಾಗ್ಯ’ ಎಂದು ಹೇಳಿದ್ದನ್ನು ಶ್ರೀಮಠ ಸ್ಮರಿಸಿಕೊಂಡಿದೆ.