ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶೆಟ್ಟೂರು, ಮಣಿರೇವು, ಅನಂತಪುರ, ಅಯ್ಯಗಾರಪಲ್ಲಿ, ಕಮ್ಮತನಹಳ್ಳಿ, ಬಚ್ಚುಪಲ್ಲಿ, ಕೈರೇವು ಗ್ರಾಮ ಹಾಗೂ ಮಾಕೋಡಿ ತಾಂಡಾ ಕರ್ನಾಟಕದ ಗಡಿಯಲ್ಲಿವೆ. ಎರಡೂ ರಾಜ್ಯದಲ್ಲಿ ಕರಳುಬಳ್ಳಿ ಸಂಬಂಧಗಳಿವೆ. ಜಿಲ್ಲೆಯ ಜನರು ಆಂಧ್ರಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡದಂತೆ ನಿರ್ಬಂಧಿಸಲಾಗಿದೆ. ಆಂಧ್ರಪ್ರದೇಶದ ಜನರು ಕರ್ನಾಟಕ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯನ್ನು ಜನರು ತಪ್ಪದೇ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.