‘2009ರಲ್ಲಿ ಯಡಿಯೂರಪ್ಪ ಅವರು ಪಂಚಮಸಾಲಿಗಳನ್ನು 3 ‘ಬಿ’ ಸೇರಿಸಿದ್ದರು. ಅಂದೇ ‘2ಎ’ಗೆ ಸೇರಿಸಬೇಕಿತ್ತು. ತಾಂತ್ರಿಕ ಕಾರಣ ಹೇಳಿ ನಮ್ಮ ಹಕ್ಕೊತ್ತಾಯವನ್ನು ಕೈಬಿಡಲಾಯಿತು. ಈಗ ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನಮಗೆ ಭರವಸೆ, ಸಂಧಾನದ ಮಾತುಗಳು ಬೇಕಿಲ್ಲ. ನಮ್ಮ ಸಮುದಾಯದ ಮಕ್ಕಳ ಭವಿಷ್ಯಕ್ಕೆ ಮೀಸಲಾತಿ ಬೇಕೇಬೇಕು. ಸರ್ಕಾರದ ಆದೇಶ ಹೊರ ಬೀಳುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ’ ಎಂದು ಹೇಳಿದರು.