ಹಣ್ಣು, ತರಕಾರಿ ಪೆಟ್ಟಿಗೆ ಅಂಗಡಿಗಳು ರಸ್ತೆಗೆ ಉರುಳಿ ಬಿದ್ದವು. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಚಳ್ಳಕೆರೆ ಕಲ್ಯಾಣದುರ್ಗದ ಮಾರ್ಗವಾಗಿ ಹೋಗುವ ಬಸ್ ಕಾಟಪ್ಪನಹಟ್ಟಿ ಬಳಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹದ ಮಳೆ ಸುರಿದಿರುವ ಕಾರಣ ಮುಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.