ಹದ ಮಳೆಗೆ ಮುಖ್ಯರಸ್ತೆ ಬದಿಯ ತಗ್ಗು, ಗುಂಡಿ, ಚರಂಡಿಗಳಲ್ಲಿ ನೀರು ಹರಿಯಿತು. ಇಲ್ಲಿನ ಕೋಟೆ ಭಾಗದ ಮರಕಟ್ಟೆ ಹಾಗೂ ನಂಜಯ್ಯನಕೆರೆಗೆ ನೀರು ಹರಿದು ಬಂದಿದೆ.
ಶುಕ್ರವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ಕಂಗುವಳ್ಳಿ ರಾಧಮ್ಮ, ಕಾರೇಹಳ್ಳಿ ಗ್ರಾಮದ ಕರಿಯಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಮನೆಗಳಿಂದ ₹ 40 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಡದಕೆರೆ, ಮತ್ತೋಡು ಹೋಬಳಿಯ ಕೆಲವೆಡೆ ಬಿರುಸಿನ ಮಳೆಯಾಗಿದೆ. ಹಿರೇಹಳ್ಳ ಮತ್ತೆ ತುಂಬಿ ಹರಿಯುತ್ತಿದೆ. ಈ ಹಳ್ಳದ ವ್ಯಾಪ್ತಿಯಲ್ಲಿ ಇರುವ ಚೆಕ್ಡ್ಯಾಂ, ಬ್ಯಾರೇಜ್ಗಳು ತುಂಬಿ ಹರಿಯುತ್ತಿದ್ದು, ಮೀನು ಪ್ರಿಯರಿಂದ ಶಿಕಾರಿ ನಡೆಯಿತು. ಮಳೆ ಇಲ್ಲದೇ ಬಾಡಿದ್ದ ರಾಗಿ ಬೆಳೆಗೆ ಜೀವಕಳೆ ಬಂದಿದೆ.