ಚಿತ್ರದುರ್ಗ: ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮುದ್ದಾಪುರ ಗ್ರಾಮದ ಸಿಂಧು (12) ಮೃತಪಟ್ಟಿದ್ದಾರೆ.
ಮುದ್ದಾಪುರ ಗ್ರಾಮ ಪಂಚಾಯಟಿ ಕಚೇರಿ ಆವರಣದಲ್ಲಿ ಈ ಅವಘಡ ನಡೆದಿದೆ. ಕಂಬಕ್ಕೆ ಕಟ್ಟಿದ್ದ ನಾಮಫಲಕದಲ್ಲಿ ವಿದ್ಯುತ್ ಪ್ರವಹಿಸಿ ದುರ್ಘಟನೆ ಸಂಭವಿಸಿದೆ.
ರಮೇಶ-ರಾಧಾ ದಂಪತಿಯ ಪುತ್ರಿ ಸಿಂಧು ಮಂಗಳವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದಳು. ವಿದ್ಯುತ್ ಅವಘಡಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.