70 ಎಕರೆ ಪ್ರದೇಶದಲ್ಲಿ ಪತಿ ತೆಂಗಿನ ಕೃಷಿಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಎಸ್.ವಿ. ವೀರಭದ್ರಪ್ಪ ದಂಪತಿ ರೇಷ್ಮೆ ಕೃಷಿ, ತೆಂಗು, ಹುಣಸೆ, ಶ್ರೀಗಂಧ, ಅಜೋಲಾ, ಹಸು ಸಾಕಣೆ, ಎರೆಹುಳು ಸಾಕಣೆ, ಮೇಕೆ ಸಾಕಣೆ, ರೇಷ್ಮೆಗೂಡು ಉತ್ಪಾದನೆ, ಬಾಳೆ, ಹೆಬ್ಬೇವು ಸೇರಿದಂತೆ ಹಲವು ಕೃಷಿಗಳನ್ನು ಮಾಡಿದ್ದರು. ಜಿಲ್ಲೆಯ ಮಟ್ಟಿಗೆ ಈ ಸಸ್ಯಕ್ಷೇತ್ರ ಕೃಷಿ ಅಧ್ಯಯನ ಕೇಂದ್ರವಾಗಿತ್ತು. ಇಲ್ಲಿ ನಡೆದಿರುವ ಪ್ರಾತ್ಯಕ್ಷಿಕೆಗಳಿಗೆ ಲೆಕ್ಕವಿಲ್ಲ ಎನ್ನುತ್ತಾರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಡಾ.ಆರ್. ವಿರೂಪಾಕ್ಷಪ್ಪ.