ರಘುನಾಥ ನಾಯ್ಕ ಅವರನ್ನು ವಿಡಿಯೊ ವೀಕ್ಷಣಾ ತಂಡದಲ್ಲಿ (ವಿವಿಟಿ) ಕಾರ್ಯ ನಿರ್ವಹಿಸಲು ಆದೇಶ ನೀಡಲಾಗಿತ್ತು. ಮಾರ್ಚ್ 15 ರಿಂದ 25 ರವರೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಇವರು, ಬಳಿಕ ಅನಧಿಕೃತವಾಗಿ ಗೈರಾಗಿದ್ದರು. ಬೇಜವಾಬ್ದಾರಿ ತೋರಿದ ಆರೋಪದ ಮೇರೆಗೆ ಪ್ರಜಾ ಪ್ರತಿನಿಧಿ ಕಾಯ್ದೆಯ ಅನ್ವಯ ಅಮಾನತು ಮಾಡಲಾಗಿದೆ.