‘ಚಳ್ಳಕೆರೆಯಿಂದ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗದ ಅಭಿವೃದ್ಧಿ ಸಂಬಂಧ ದಿಲೀಪ್ ಬಿಲ್ಡ್ಕಾನ್ ಗುತ್ತಿಗೆ ಪಡೆದಿದೆ. ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲು ಎನ್ಒಸಿ ಪಡೆಯಬೇಕು. ಅದಕ್ಕಾಗಿ ಗುತ್ತಿಗೆದಾರರು ಮೊಳಕಾಲ್ಮುರು ತಹಶೀಲ್ದಾರ್ ಬಳಿ ಬಂದಾಗ ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರು ದಾಖಲಾಗಿದೆ’ ಎಂದು ಎಸಿಬಿ ದಾವಣಗೆರೆ ಪೂರ್ವವಲಯದ ಎಸ್ಪಿ ಜಯಪ್ರಕಾಶ್ ತಿಳಿಸಿದ್ದಾರೆ.