‘ಅರಣ್ಯ ಇಲಾಖೆಯಲ್ಲಿ ಏನೇನು ಸೌಲಭ್ಯ ಯಾವಾಗ್ಯಾವಾಗ ಸಿಗುತ್ತದೆ. ಯಾವ್ಯಾವ ಸಸಿ ಬೆಳೆಸಲು ಎಷ್ಟೆಷ್ಟು ಸಹಾಯಧನ ಎಷ್ಟು ವರ್ಷ ಸಿಗುತ್ತದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಿಲ್ಲ. ಕಚೇರಿಗೆ ಬಂದು ಹೋಗುವ, ಅಧಿಕಾರಿಗಳ ಜತೆಗೆ ಸಂಪರ್ಕದಲ್ಲಿ ಇರುವವರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ. ಹಲವು ರೈತರಿಗೆ ಶ್ರೀಗಂಧ, ಸಾಗುವಾನಿ, ರಕ್ತಚಂದನ ಸೇರಿ ಇನ್ನಿತರ ಸಸಿಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡುತ್ತಾರೆ. ಆದರೆ, ಯಾವುದೇ ರೈತರ ಜಮೀನಿನಲ್ಲಿ ಶ್ರೀಗಂಧದ ಸಸಿ ಬೆಳೆಸಿರುವುದು ಕಾಣಿಸುತ್ತಿಲ್ಲ’ ಎಂದು ಸದಸ್ಯ ನಿರಂಜನಮೂರ್ತಿ ದೂರಿದರು.