‘ಮಳೆಗಾಲದಲ್ಲಿ ನೀರಿಗೆ ಯಾವುದೇ ತೊಂದರೆಯಿಲ್ಲ. ಆದರೆ ಬೇಸಿಗೆ ಆರಂಭವಾದೊಡನೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ವಾರಕ್ಕೊಮ್ಮೆ ಇಲ್ಲಿನ ಜನ ಹೊಟ್ಟೆನೋವು, ಕಿಡ್ನಿ ಕಲ್ಲು, ಹೊಟ್ಟೆಉರಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮನೆ ಮನೆಗೂ ನಲ್ಲಿ ಮಾಡಿಸಿದ್ದಾರೆ. ಆದರೆ ಅವು ಕಳಪೆ ಕಾಮಗಾರಿಯಿಂದ ಎರಡು ವರ್ಷಕ್ಕೇ ಹಾಳಾಗಿವೆ. ಕೊಳವೆಬಾವಿ ಇದ್ದರೂ ಪ್ರಯೋಜನವಿಲ್ಲ’ ಎಂದು ದೂರುತ್ತಾರೆ ಧನಂಜಯ.