ಅದಕ್ಕೆ ಪ್ರತಿಕ್ರಿಯಿಸಿದ ಪಂಡಿತಾರಾಧ್ಯ ಶ್ರೀ, ‘ಉತ್ತರಾಧಿಕಾರಿ ನೇಮಕದ ನಿರ್ಧಾರ ಅಚಲ. ಇದು ವಯೋಸಹಜ ತೀರ್ಮಾನ. ನಮಗೆ ವಯಸ್ಸಾಗಿದ್ದು, ಜೀವಕ್ಕೆ ಏನಾದರೂ ತೊಂದರೆಯಾದರೆ ಶ್ರೀಮಠಕ್ಕೆ ಅನಾಥ ಪ್ರಜ್ಞೆ ಕಾಡಬಾರದು. ಹಾಗಾಗಿ, ಯೋಗ್ಯ ಉತ್ತರಾಧಿಕಾರಿ ನೇಮಕ ಮಾಡಿ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.