‘ನಗರಕ್ಕೆ ಮಿನಿ ವಿಧಾನಸೌಧ ಕಟ್ಟಡ ಮಂಜೂರು ಮಾಡಿಸಬೇಕು. ಕೆಎಸ್ಆರ್ಟಿಸಿ ಡಿಪೊ ತರಬೇಕಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ಅವರಿಗೆ ನೀರು, ವಲಸೆ ತಡೆಗೆ ಸ್ಥಳೀಯವಾಗಿ ಉದ್ಯೋಗ ಕೊಡಿಸಬೇಕಿದೆ. ಒಣಗುತ್ತಿರುವ ತೆಂಗು, ಅಡಿಕೆ ತೋಟದ ರೈತರಿಗೆ ಯಾವುದಾದರೂ ರೂಪದಲ್ಲಿ ನೆರವು ಕೊಡಿಸಬೇಕಿದೆ. ಒಂದೆರಡು ತಿಂಗಳಲ್ಲಿ ಜಾನುವಾರು ರಕ್ಷಣೆಗೆ ಗೋಶಾಲೆ ಆರಂಭಿಸಬೇಕಿದೆ’ ಎಂದು ಹೇಳಿದರು.