ವಿಷಯ ತಿಳಿದ ಕುಟುಂಬದವರು ಹೊನ್ನೇಕೆರೆ ಗ್ರಾಮಕ್ಕೆ ಬಂದು ತಿಪ್ಪೇಶ ಅವರನ್ನು ನೋಡಿ ಭಾವುಕರಾದರು. ತಿಪ್ಪೇಶ ಸಹ ಸಹೋದರರಾದ ರಾಮಾಂಜನೇಯ, ರಾಜಣ್ಣ, ಸಹೋದರಿ ರತ್ನಮ್ಮ ಅವರನ್ನು ಗುರುತು ಹಿಡಿದು ಕಣ್ಣಿರು ಸುರಿಸಿದರು. ಕುಟುಂಬದವರು ತಿಪ್ಪೇಶ್ ಅವರನ್ನು ಕಳುಹಿಸುವಂತೆ ಕೇಳಿದಾಗ, ‘ಅವರು ನಿಮ್ಮ ಸಹೋದರ ಎನ್ನುವುದಕ್ಕೆ ಪೂರಕ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಕಳುಹಿಸುವುದಿಲ್ಲ’ ಎಂದು ಹೊನ್ನೆಕೆರೆ ರಾಜಣ್ಣ ಪಟ್ಟುಹಿಡಿದರು.