ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ರೋಗಗ್ರಸ್ತ ಕಾರ್ಖಾನೆಗಳನ್ನು ಪುನಶ್ಚೇತನ ಮಾಡುವಲ್ಲಿ ಅನುಭವ ಇದೆ. ಪ್ರಾಥಮಿಕ ವರದಿ ನೀಡಲು ಹೇಳಿದ್ದೇವೆ. ಯಾವ ರೀತಿ ಸುಧಾರಣೆ ಮಾಡಬೇಕು ಎಂಬುದನ್ನು ಆಲೋಚಿಸುತ್ತೇವೆ. ಹಟ್ಟಿ ಚಿನ್ನದ ಗಣಿಯ ಅಭಿವೃದ್ಧಿಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.