‘ಧರ್ಮಪುರ ಹೋಬಳಿಯ ಹರಿಯಬ್ಬೆ, ಮುಂಗುಸುವಳ್ಳಿ, ಅರಳೀಕೆರೆ, ಸಕ್ಕರ, ವೇಣುಕಲ್ಲುಗುಡ್ಡ, ಚಿಲ್ಲಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಮದ್ದಿಹಳ್ಳಿ, ಬೆನಕನಹಳ್ಳಿ, ಕೋಡಿಹಳ್ಳಿ, ಶ್ರವಣಗೆರೆ, ಕಣಜನಹಳ್ಳಿ, ಧರ್ಮಪುರ, ಬೆನಕನಹಳ್ಳಿ, ಈಶ್ವರಗೆರೆ ಮತ್ತಿತರ ಕಡೆ ಹೆಚ್ಚಾಗಿ ಟೊಮೆಟೊ ನಾಟಿ ಮಾಡಿದ್ದು ಉತ್ತಮ ಬೆಳೆ ಮತ್ತು ದರ ಸಿಗಬಹುದೆಂದು ಊಹಿಸಿದ್ದೆವು. ಆದರೆ, ಬೆಲೆ ಕುಸಿತದಿಂದ ನಮ್ಮ ಕನಸು ನುಚ್ಚು ನೂರಾಗಿದೆ’ ಎಂದು ಹರಿಯಬ್ಬೆ ರೈತ ಜನಾರ್ದನ ಬೇಸರ ವ್ಯಕ್ತಪಡಿಸಿದರು.