<p><strong>ಮೊಳಕಾಲ್ಮುರು:</strong> ಪಟ್ಟಣದ ಮುಖ್ಯರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವ ಪರಿಣಾಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಆಗಾಗ ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿದೆ.</p>.<p>2021ರಲ್ಲಿ ಹಾನಗಲ್- ರಾಯದುರ್ಗ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಲಾಯಿತು. ನಿಗದಿತ ಅಳತೆಗೆ ಕಟ್ಟಡ ತೆರವು ಮಾಡಲು ರಸ್ತೆಬದಿಯ ಕಟ್ಟಡಗಳ ಮಾಲೀಕರು ಒಪ್ಪದ ಕಾರಣ, ಜಿಲ್ಲಾಡಳಿತ ಕೊನೆಗೆ ಎರಡೂ ಬದಿ ಸೇರಿ 42 ಮೀಟರ್ ವಿಸ್ತರಣೆ ಮಾಡಿತು.</p>.<p>ಪಟ್ಟಣ ಪಂಚಾಯಿತಿ ಒಟ್ಟು 50 ಮೀಟರ್ ವಿಸ್ತರಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಸ್ತೆಬದಿಯಲ್ಲಿ ಕಟ್ಟಡ ಹೊಂದಿರುವ ಕೆಲವು ಮಾಲೀಕರು ನ್ಯಾಯಾಲಯದ ಮೊರೆ ಹೋದ ನಂತರ ವಿಸ್ತರಣೆ ಕಾರ್ಯ ಕಗ್ಗಂಟಾಯಿತು. ಕಾಮಗಾರಿಯನ್ನು ಪಡೆದ ಗುತ್ತಿಗೆದಾರ, ‘ಕೋವಿಡ್ ಹಾಗೂ ಹೆಬ್ಬಂಡೆಗಳು ಅಡ್ಡ ಬಂದಿವೆ’ ಎಂಬ ತಾಂತ್ರಿಕ ಕಾರಣಗಳನ್ನು ಮುಂದಿಟ್ಟಿದ್ದರಿಂದ ಕಾಮಗಾರಿ ಆಮೆ ವೇಗದಿಂದ ಸಾಗಿತು.</p>.<p>ವಿಧಾನಸಭೆ ಚುನಾವಣೆ ವೇಳೆ ಕಾಮಗಾರಿ ಸ್ಥಗಿತವಾಗಿ ಒಂದು ವರ್ಷದ ನಂತರ ಆರಂಭವಾಯಿತು. ನಂತರ ತರಾತುರಿಯಲ್ಲಿ ಕಾರ್ಯ ಪೂರ್ಣಗೊಳಿಸಲಾಯಿತು. ಆದರೆ, ಪಾದಚಾರಿ ಮಾರ್ಗ ನಿರ್ಮಾಣವಾಗದ ಕಾರಣ ದಾರಿಹೋಕರಿಗೆ ಓಡಾಡಲೂ ಸಮಸ್ಯೆಯುಂಟಾಗಿದೆ. ರಸ್ತೆಯ ಎರಡೂ ಬದಿ ವಾಹನಗಳೇ ನಿಲ್ಲುವ ಕಾರಣ ಜಾಗವೇ ಇಲ್ಲದಂತಾಗಿದೆ.</p>.<p>ದೊಡ್ಡ ಪಾದಚಾರಿ ಮಾರ್ಗ ನಿರ್ಮಿಸದೆ ಚಿಕ್ಕದಾಗಿ ನಿರ್ಮಿಸಿ, ರಸ್ತೆಬದಿಗೆ ಗ್ರಿಲ್ ಹಾಕಲಾಗಿದೆ. ಅಲ್ಲೇ ಮುಖ್ಯರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಬೈಕ್ ಆಟೊಗಳನ್ನು ನಿಲ್ಲಿಸಲು ಪಟ್ಟಣ ಪಂಚಾಯಿತಿ ಪ್ರತ್ಯೇಕ ಸ್ಥಳ ನಿಗದಿ ಮಾಡಿಕೊಟ್ಟಿಲ್ಲ. ಇದರಿಂದ ಮುಖ್ಯರಸ್ತೆಯ ಎರಡೂ ಬದಿ ವಾಹನಗಳು ನಿಂತುಕೊಳ್ಳುವುದರಿಂದ ರಸ್ತೆಯ ಅರ್ಧಭಾಗ ವಾಹನಗಳನ್ನು ನಿಲ್ಲಿಸಲು ಬಳಕೆಯಾಗುತ್ತಿದೆ. ಉಳಿದ ಅರ್ಧದಲ್ಲಿ ವಾಹನಗಳು ಸಂಚರಿಸಬೇಕಿದೆ. ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್ಗಳೂ ಕೆಲವೆಡೆ ಮುರಿದಿದ್ದರಿಂದ ಸಂಚಾರ ಸುಲಭವಾಗುತ್ತಿಲ್ಲ.</p>.<p>‘ಭಾರಿ ವಾಹನಗಳು ಬಂದಾಗ ಸಂಚಾರ ದಟ್ಟಣೆ ಆಗುತ್ತಿದೆ. ಕೆಲಸ ಕಾರ್ಯಗಳಿಗೆ ಹಳ್ಳಿಗಳಿಂದ ಬರುವವರು ಬೈಕ್ ನಿಲ್ಲಿಸಿ ಹೋಗುತ್ತಾರೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟಲ್ಲಿ ಸಮಸ್ಯೆ ಸರಿ ಹೋಗಲಿದೆ. ಮುಖ್ಯರಸ್ತೆಯ ಎಡಬದಿಯಲ್ಲಿ ಅಂಗಡಿಗಳಿದ್ದು ಬೈಕ್ ನಿಲ್ಲಿಸಿದರೆ ಅಂಗಡಿಯವರು ಅಡ್ಡಿಪಡಿಸುವ ಕಾರಣ ಬಲಬದಿಯಲ್ಲಿ ಹೆಚ್ಚಾಗಿ ಬೈಕ್ಗಳನ್ನು ನಿಲ್ಲಿಸಲಾಗುತ್ತಿದೆ. ಬಸ್ನಿಲ್ದಾಣ ಸೇವೆ ಆರಂಭಿಸಿದ ನಂತರ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಪಟ್ಟಣ ಪಂಚಾಯಿತಿ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು‘ ಎಂದು ಸ್ಥಳೀಯ ನಿವಾಸಿ ಬಿ. ವಿಜಯ್ ಆಗ್ರಹಿಸಿದರು.</p>.<p>ಬಸ್ ನಿಲ್ದಾಣದ ಮುಂಭಾಗದಲ್ಲಿ ಆಟೊ ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಆಟೊ ನಿಲುಗಡೆಗೂ ಸಮಸ್ಯೆ ಎದುರಾಗಿದೆ. ನಿಲ್ದಾಣದ ಮುಂಭಾಗದಲ್ಲಿ ಸ್ಥಳ ಬಿಟ್ಟುಕೊಡುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದರು. ಈ ಬಗ್ಗೆ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ವ್ಯವಸ್ಥೆಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.</p>.<p>ಸಂತೆ ಮೈದಾನ ವಿವಾದದಿಂದ ವಾರದ ಸಂತೆಯೂ ರಸ್ತೆಬದಿಗೆ ಸ್ಥಳಾಂತರವಾಗಿದ್ದು, ಬುಧವಾರ ವಾಹನ ದಟ್ಟಣೆ ಹೆಚ್ಚಿ ಸಂಚಾರ ಕಿರಿಕಿರಿ ಹೆಚ್ಚುತ್ತಿದೆ. ಅಂದು ರಸ್ತೆಬದಿ ವಾಹನ ನಿಲುಗಡೆ ಹೆಚ್ಚುವ ಕಾರಣ ಸಂಚಾರ ವ್ಯತ್ಯಯ ಸಾಮಾನ್ಯವಾಗಿದೆ. ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.</p>.<div><blockquote>ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳಕ್ಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಲಾಗಿತ್ತು ಯಾವುದೇ ಉತ್ತರ ಬಂದಿಲ್ಲ. ಮತ್ತೆ ಸ್ಥಳ ನಿಗದಿ ಮಾಡಿಕೊಡುವಮತೆ ಮನವಿ ಮಾಡಲಾಗುವುದು </blockquote><span class="attribution">ಮಹೇಶ್ ಹೊಸಪೇಟೆ, ಪಿಎಸ್ಐ ಮೊಳಕಾಲ್ಮುರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಪಟ್ಟಣದ ಮುಖ್ಯರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವ ಪರಿಣಾಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಆಗಾಗ ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿದೆ.</p>.<p>2021ರಲ್ಲಿ ಹಾನಗಲ್- ರಾಯದುರ್ಗ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಲಾಯಿತು. ನಿಗದಿತ ಅಳತೆಗೆ ಕಟ್ಟಡ ತೆರವು ಮಾಡಲು ರಸ್ತೆಬದಿಯ ಕಟ್ಟಡಗಳ ಮಾಲೀಕರು ಒಪ್ಪದ ಕಾರಣ, ಜಿಲ್ಲಾಡಳಿತ ಕೊನೆಗೆ ಎರಡೂ ಬದಿ ಸೇರಿ 42 ಮೀಟರ್ ವಿಸ್ತರಣೆ ಮಾಡಿತು.</p>.<p>ಪಟ್ಟಣ ಪಂಚಾಯಿತಿ ಒಟ್ಟು 50 ಮೀಟರ್ ವಿಸ್ತರಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಸ್ತೆಬದಿಯಲ್ಲಿ ಕಟ್ಟಡ ಹೊಂದಿರುವ ಕೆಲವು ಮಾಲೀಕರು ನ್ಯಾಯಾಲಯದ ಮೊರೆ ಹೋದ ನಂತರ ವಿಸ್ತರಣೆ ಕಾರ್ಯ ಕಗ್ಗಂಟಾಯಿತು. ಕಾಮಗಾರಿಯನ್ನು ಪಡೆದ ಗುತ್ತಿಗೆದಾರ, ‘ಕೋವಿಡ್ ಹಾಗೂ ಹೆಬ್ಬಂಡೆಗಳು ಅಡ್ಡ ಬಂದಿವೆ’ ಎಂಬ ತಾಂತ್ರಿಕ ಕಾರಣಗಳನ್ನು ಮುಂದಿಟ್ಟಿದ್ದರಿಂದ ಕಾಮಗಾರಿ ಆಮೆ ವೇಗದಿಂದ ಸಾಗಿತು.</p>.<p>ವಿಧಾನಸಭೆ ಚುನಾವಣೆ ವೇಳೆ ಕಾಮಗಾರಿ ಸ್ಥಗಿತವಾಗಿ ಒಂದು ವರ್ಷದ ನಂತರ ಆರಂಭವಾಯಿತು. ನಂತರ ತರಾತುರಿಯಲ್ಲಿ ಕಾರ್ಯ ಪೂರ್ಣಗೊಳಿಸಲಾಯಿತು. ಆದರೆ, ಪಾದಚಾರಿ ಮಾರ್ಗ ನಿರ್ಮಾಣವಾಗದ ಕಾರಣ ದಾರಿಹೋಕರಿಗೆ ಓಡಾಡಲೂ ಸಮಸ್ಯೆಯುಂಟಾಗಿದೆ. ರಸ್ತೆಯ ಎರಡೂ ಬದಿ ವಾಹನಗಳೇ ನಿಲ್ಲುವ ಕಾರಣ ಜಾಗವೇ ಇಲ್ಲದಂತಾಗಿದೆ.</p>.<p>ದೊಡ್ಡ ಪಾದಚಾರಿ ಮಾರ್ಗ ನಿರ್ಮಿಸದೆ ಚಿಕ್ಕದಾಗಿ ನಿರ್ಮಿಸಿ, ರಸ್ತೆಬದಿಗೆ ಗ್ರಿಲ್ ಹಾಕಲಾಗಿದೆ. ಅಲ್ಲೇ ಮುಖ್ಯರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಬೈಕ್ ಆಟೊಗಳನ್ನು ನಿಲ್ಲಿಸಲು ಪಟ್ಟಣ ಪಂಚಾಯಿತಿ ಪ್ರತ್ಯೇಕ ಸ್ಥಳ ನಿಗದಿ ಮಾಡಿಕೊಟ್ಟಿಲ್ಲ. ಇದರಿಂದ ಮುಖ್ಯರಸ್ತೆಯ ಎರಡೂ ಬದಿ ವಾಹನಗಳು ನಿಂತುಕೊಳ್ಳುವುದರಿಂದ ರಸ್ತೆಯ ಅರ್ಧಭಾಗ ವಾಹನಗಳನ್ನು ನಿಲ್ಲಿಸಲು ಬಳಕೆಯಾಗುತ್ತಿದೆ. ಉಳಿದ ಅರ್ಧದಲ್ಲಿ ವಾಹನಗಳು ಸಂಚರಿಸಬೇಕಿದೆ. ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್ಗಳೂ ಕೆಲವೆಡೆ ಮುರಿದಿದ್ದರಿಂದ ಸಂಚಾರ ಸುಲಭವಾಗುತ್ತಿಲ್ಲ.</p>.<p>‘ಭಾರಿ ವಾಹನಗಳು ಬಂದಾಗ ಸಂಚಾರ ದಟ್ಟಣೆ ಆಗುತ್ತಿದೆ. ಕೆಲಸ ಕಾರ್ಯಗಳಿಗೆ ಹಳ್ಳಿಗಳಿಂದ ಬರುವವರು ಬೈಕ್ ನಿಲ್ಲಿಸಿ ಹೋಗುತ್ತಾರೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟಲ್ಲಿ ಸಮಸ್ಯೆ ಸರಿ ಹೋಗಲಿದೆ. ಮುಖ್ಯರಸ್ತೆಯ ಎಡಬದಿಯಲ್ಲಿ ಅಂಗಡಿಗಳಿದ್ದು ಬೈಕ್ ನಿಲ್ಲಿಸಿದರೆ ಅಂಗಡಿಯವರು ಅಡ್ಡಿಪಡಿಸುವ ಕಾರಣ ಬಲಬದಿಯಲ್ಲಿ ಹೆಚ್ಚಾಗಿ ಬೈಕ್ಗಳನ್ನು ನಿಲ್ಲಿಸಲಾಗುತ್ತಿದೆ. ಬಸ್ನಿಲ್ದಾಣ ಸೇವೆ ಆರಂಭಿಸಿದ ನಂತರ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಪಟ್ಟಣ ಪಂಚಾಯಿತಿ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು‘ ಎಂದು ಸ್ಥಳೀಯ ನಿವಾಸಿ ಬಿ. ವಿಜಯ್ ಆಗ್ರಹಿಸಿದರು.</p>.<p>ಬಸ್ ನಿಲ್ದಾಣದ ಮುಂಭಾಗದಲ್ಲಿ ಆಟೊ ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಆಟೊ ನಿಲುಗಡೆಗೂ ಸಮಸ್ಯೆ ಎದುರಾಗಿದೆ. ನಿಲ್ದಾಣದ ಮುಂಭಾಗದಲ್ಲಿ ಸ್ಥಳ ಬಿಟ್ಟುಕೊಡುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದರು. ಈ ಬಗ್ಗೆ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ವ್ಯವಸ್ಥೆಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.</p>.<p>ಸಂತೆ ಮೈದಾನ ವಿವಾದದಿಂದ ವಾರದ ಸಂತೆಯೂ ರಸ್ತೆಬದಿಗೆ ಸ್ಥಳಾಂತರವಾಗಿದ್ದು, ಬುಧವಾರ ವಾಹನ ದಟ್ಟಣೆ ಹೆಚ್ಚಿ ಸಂಚಾರ ಕಿರಿಕಿರಿ ಹೆಚ್ಚುತ್ತಿದೆ. ಅಂದು ರಸ್ತೆಬದಿ ವಾಹನ ನಿಲುಗಡೆ ಹೆಚ್ಚುವ ಕಾರಣ ಸಂಚಾರ ವ್ಯತ್ಯಯ ಸಾಮಾನ್ಯವಾಗಿದೆ. ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.</p>.<div><blockquote>ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳಕ್ಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಲಾಗಿತ್ತು ಯಾವುದೇ ಉತ್ತರ ಬಂದಿಲ್ಲ. ಮತ್ತೆ ಸ್ಥಳ ನಿಗದಿ ಮಾಡಿಕೊಡುವಮತೆ ಮನವಿ ಮಾಡಲಾಗುವುದು </blockquote><span class="attribution">ಮಹೇಶ್ ಹೊಸಪೇಟೆ, ಪಿಎಸ್ಐ ಮೊಳಕಾಲ್ಮುರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>