ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಉರುಳಿ ಕಾರುಗಳು ಜಖಂ

Last Updated 27 ಜೂನ್ 2020, 15:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಹೋಟೆಲ್ ಐಶ್ವರ್ಯ ಫೋರ್ಟ್ ಹಿಂಭಾಗದ ಎಸ್‌ಆರ್‌ಇ ಲೇಔಟ್‌ನ ಚೌಡೇಶ್ವರಿ ದೇಗುಲ ಸಮೀಪ ಹಳೆಯ ಮರವೊಂದು ಉರುಳಿದ್ದು, ಆರು ಕಾರುಗಳು ಜಖಂಗೊಂಡಿವೆ.

ಶುಕ್ರವಾರ ತಡರಾತ್ರಿ ಮರ ಬಿದ್ದಿದ್ದರಿಂದಾಗಿ ಕಾರುಗಳ ಕಿಟಕಿ ಗಾಜು ಒಡೆದು ಭಾರೀ ಸದ್ದಾಗಿದೆ. ರಾತ್ರಿ ವೇಳೆ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ದೇಗುಲ ಹಾಗೂ ಇತರೆ ಕಟ್ಟಡಗಳಿಗೆ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಕಾರುಗಳು ನಿಂತಿರುತ್ತಿದ್ದವು. ಆದರೆ, ನಾಲ್ಕನೇ ಶನಿವಾರ ರಜೆ ಇದ್ದಿದ್ದರಿಂದ ಹೆಚ್ಚು ವಾಹನಗಳ ನಿಲುಗಡೆ ಆಗಿರಲಿಲ್ಲ. ಆದರೆ, ನಿಂತಿದ್ದ ಆರು ಕಾರುಗಳು ಜಖಂಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT