10 ವರ್ಷಗಳಿಂದ ಬುಕ್ಕರಾಯನ ಕೆರೆ ತುಂಬಿಲ್ಲ. ಕಳೆದ ಜೂನ್ ತಿಂಗಳಲ್ಲಿ ರೈತರು ಸ್ವಯಂಪ್ರೇರಿತರಾಗಿ ಕೆರೆಯ ಫಲವತ್ತಾದ ಮಣ್ಣನ್ನು ತಮ್ಮ ತೋಟಗಳಿಗೆ ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಹೋಗಿದ್ದ ಫಲವಾಗಿ ಶೇ 75ರಷ್ಟು ನೀರು ಶೇಖರಣೆಯಾಗಲು ಅನುಕೂಲವಾಗಿದೆ ಎಂದರು. ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ರೈತರಿಗೆ ಸಂಬಂಧಿಸಿದ ಪರಿಕರಗಳು, ಪುಸ್ತಕ, ಬಟ್ಟೆ ಹಾಗೂ ಗೃಹೋಪಯೋಗಿ ಸ್ಟಾಲ್ಗಳು ಗಮನ ಸೆಳೆದವು. ಶ್ರದ್ಧಾಂಜಲಿ ಮಹಾಮಂಟಪದ ಎರಡೂ ಕಡೆ ಮತ್ತು ಐಕ್ಯಮಂಟಪದ ಮುಂಭಾಗದಲ್ಲಿ ಇದ್ದ ಬಣ್ಣದ ನೀರಿನ ಕಾರಂಜಿ ಮಕ್ಕಳಿಗೆ ಮನರಂಜನೆ ನೀಡಿತು.