ಅನುಮಾನ ಬಂದ ಗ್ರಾಮಸ್ಥರು ಇದೇ ಗುರುವಾರ ಪರಶುರಾಂಪುರದಲ್ಲಿ ಟಿಪ್ಪರ್ ಲಾರಿಯನ್ನು ಹಿಡಿದು ಪರೀಶಿಲಿಸಿದಾಗ ಮರಳು ಇರುವುದು ಖಚಿತವಾಗಿದೆ. ಆಗ ಸಂಬಂಧಪಟ್ಟ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಲಾರಿಯನ್ನು ಪೋಲಿಸರು ವಶಕ್ಕೆ ನೀಡಲಾಗಿದೆ. ಈ ಸಂಬಂಧ ಪರಶುರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಎಷ್ಟು ಬಾರಿ ಅಕ್ರಮ ಮರಳನ್ನು ಬೇರೆಕಡೆ ಸಾಗಿಸಿದ ಸಂಪೂರ್ಣ ತನಿಖೆ ನಡೆಸಬೇಕೆಂದು ಪರಶುರಾಂಪುರದ ಗ್ರಾಮಸ್ಥರಾದ ಕಿಚ್ಚ ಸುದೀಪ್ ಅಭಿಮಾನ ಬಳಗದ ಅಧ್ಯಕ್ಷ ಸುಧಾಕರ್, ಜೈ ಕರ್ನಾಟಕ ಸಂಘಟನೆಯ ಸದಸ್ಯ ವೆಂಕಟೇಶ್ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಜಯವೀರಾಚಾರಿ ರವಿ, ವೆಂಕಟೇಶ್ ಆಗ್ರಹಿಸಿದರು.