ಹಿರಿಯೂರು:ನಗರದ ಚಳ್ಳಕೆರೆ ರಸ್ತೆಯಲ್ಲಿಮಂಗಳವಾರ ರಾತ್ರಿಪಾದಚಾರಿ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ವಸತಿ ಗೃಹದ ನಿವಾಸಿ ರೇಣುಕಾ (32) ಮೃತಪಟ್ಟವರು. ಕೃಷಿ ಇಲಾಖೆ ಹಿಂಭಾಗದಲ್ಲಿನ ಮನೆಗಳಿಗೆ ಹಾಲು ಕೊಟ್ಟು ಮರಳುವಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲು ಮಾಡಿಕೊಂಡಿರುವ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.